January 16, 2008

ಗುರು ಕೊಟ್ಟ … (ಉತ್ತರ ಕನ್ನಡದ ಗಾದೆ – 129)

ಗುರು ಕೊಟ್ಟ ಜೋಳಿಗೆಯೆಂದು ಗೂಟಕ್ಕೆ ನೇತು ಹಾಕಿದರೆ ಭಿಕ್ಷೆ ಬಂದು ಬೀಳುವುದಿಲ್ಲ.

ಅದು ಗುರು ಕೊಟ್ಟ ಅದ್ಭುತ ಶಕ್ತಿಯುಳ್ಳ ಜೋಳಿಗೆಯಾದರೂ ಅದನ್ನು ಬರಿದೇ ಗೂಟಕ್ಕೆ ನೇತು ಹಾಕಿ ಇಟ್ಟರೆ ಭಿಕ್ಷೆ ತಾನಾಗಿಯೇ ಬಂದು ಅದರಲ್ಲಿ ಬೀಳುವುದಿಲ್ಲ. ತಾನೇ ಹೋಗಿ ಬೇಡಿದರೆ ಮಾತ್ರ ಭಿಕ್ಷೆ ಸಿಗುತ್ತದೆ.

ಅಂತೆಯೇ ಯಾರಿಗೋ ಹೇಳಿದ್ದೇನೆ, ಅಥವಾ ಇನ್ಯಾರೋ ಹೇಳಿದ್ದಾರೆ ಎಂದುಕೊಂಡು ನಾವು ಸುಮ್ಮನಿದ್ದರೆ ನಮ್ಮ ಕೆಲಸ ಆಗುವುದಿಲ್ಲ. ನಮ್ಮ ಕೆಲಸ ಆಗಬೇಕಾದರೆ ನಮ್ಮ ಪ್ರಯತ್ನ ತೀರಾ ಅವಶ್ಯ ಎಂಬುದನ್ನು ಈ ಗಾದೆ ಹೇಳುತ್ತದೆ.

No comments: