June 16, 2009

ಬದಲಾವಣೆ ಬೇಕಾಗಿದೆ

ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೆಂದರೆ ಹರಸಾಹಸವೇ ಸರಿ. ಹೊಗೆ ಕುಡಿಯುತ್ತ, ವಾಹನಗಳ ಕಿರಿಚಾಟವನ್ನು ಸಹಿಸುತ್ತಾ ಮನೆ ತಲುಪುವಷ್ಟರಲ್ಲಿ ಯಾರಾದರೂ ಮಾತನಾಡಿಸಿದರೆ ಗದರುವಷ್ಟು ಸುಸ್ತಾಗಿರುತ್ತದೆ; ಕಿರಿಕಿರಿಯಾಗಿರುತ್ತದೆ.

ಮುಂದುವರಿದ ಬಹುತೇಕ ರಾಷ್ಟ್ರಗಳಲ್ಲಿ bicycle ಗಳನ್ನು ಜನರು ತುಂಬಾ ಉಪಯೋಗಿಸುತ್ತಾರೆಂದು ಕೇಳಿದ್ದೇನೆ. ನಾನು ನೋಡಿದಂತೆ ಟೋಕಿಯೋದಲ್ಲಿ office ಗೆ ಹೋಗುವವರು ಹಲವರು formal dress ಹಾಕಿಕೊಂಡು bicycle ತುಳಿಯುತ್ತಿರುತ್ತಾರೆ. ಅದನ್ನು ಅವಮಾನವೆಂದು ಭಾವಿಸುವುದಿಲ್ಲ. Market ಗೆ ಹೋಗುವುದಂತೂ ಹೆಚ್ಚಾಗಿ bicycle ನಲ್ಲಿಯೇ. ಮಕ್ಕಳು ತುಂಬಾ ಚಿಕ್ಕವರಿದ್ದಾಗಿನಿಂದಲೇ ತಂದೆ-ತಾಯಿ bicycle ಕಲಿಸುತ್ತಿರುತ್ತಾರೆ. ಮುದುಕ ಮುದುಕಿಯರಾಗುವವರೆಗೂ ಅದನ್ನೇ ಅಭ್ಯಾಸವಾಗಿಸಿಕೊಂಡಿರುತ್ತಾರೆ. Shopping mall ಗಳ basement ಗಳಲ್ಲಿ ಅಥವಾ ಪಕ್ಕದಲ್ಲಿ bicycle parking ಗೆ ಜಾಗವನ್ನು ಮೀಸಲಾಗಿಟ್ಟಿರುತ್ತಾರೆ.
Younger generation ನ ಹುಡುಗ-ಹುಡುಗಿಯರೂ ಹೆಚ್ಚಾಗಿ bicycle ಗಳನ್ನೇ ಉಪಯೋಗಿಸುತ್ತಾರೆ. ನಮ್ಮಲ್ಲಿಯಂತೆ ಅದನ್ನು ತನ್ನ ಅಂತಸ್ತಿಗೆ ಧಕ್ಕೆ ತರುವಂಥದು ಎಂದು ತಿಳಿಯುವುದಿಲ್ಲ. ನಮ್ಮಲ್ಲಿ ಹದಿನಾರು ವರ್ಷ ಕಳೆದ ನಂತರ bicycle ತುಳಿಯುವವರು ತೀರ ಅಪರೂಪ. ಮನೆಯ ಹತ್ತಿರದಲ್ಲಿಯೇ ಇರುವ ಅಂಗಡಿಗೆ ಹೋಗಲೂ ಕೂಡ motor bike ಹತ್ತಿಯೇ ಹೋಗುತ್ತಾರೆ; ಹೊಗೆ ಉಗುಳುತ್ತ ಇನ್ನು ಕೆಲವೊಮ್ಮೆ ಹೊಗೆಯ ಜೊತೆ ಗುಟಖಾ ಕೂಡ ಉಗುಳುತ್ತ!
ನಮ್ಮ ಬೆಂಗಳೂರಿನಲ್ಲಿ ವಾಹನಗಳ horn ಶಬ್ದವಂತೂ ಕಿವಿಗಡಚಿಕ್ಕುತ್ತವೆ. ಅನವಶ್ಯಕವಾಗಿ horn ಮಾಡುವವರೇ ಹೆಚ್ಚು. Traffic signal ನಲ್ಲಿ ನಿಂತಾಗಲೂ horn ಮಾಡುವವರಿಗೇನು ಹೇಳಲು ಸಾಧ್ಯ? ಮುಂದೆ ನಿಂತವನು signal ಹಸಿರು ಬಣ್ಣಕ್ಕೆ ತಿರುಗಿದ ನಂತರ ಕದಲಲು ಎರಡು second ಗಳ ಕಾಲ ಜಾಸ್ತಿ ತೆಗೆದುಕೊಂಡರೆ ಅಷ್ಟರಲ್ಲಿ ಹತ್ತು ಜನರು horn ಮಾಡಿಬಿಟ್ಟಿರುತ್ತಾರೆ! ಎರಡು second ಗಳಷ್ಟು ತಾಳ್ಮೆ ಬಹುತೇಕ ಜನಕ್ಕೆ ಇಲ್ಲ. ನಂಬಿದರೆ ನಂಬಿ, ಅತ್ಯಂತ ಜನಸಾಂದ್ರತೆಯುಳ್ಳ ಟೋಕಿಯೋದಲ್ಲಿ ನಾನಿದ್ದ ಒಂದೂವರೆ ವರ್ಷದಲ್ಲಿ ನಾನು ಕೇವಲ ಏಳೆಂಟು ಸಲ horn ಸದ್ದನ್ನು ಕೇಳಿದ್ದೇನೆ. ಆಗೆಲ್ಲಾ ನಾವು ಯಾರೋ ಭಾರತೀಯ ಮನುಷ್ಯ drive ಮಾಡುತ್ತಿರಬಹುದು ಎಂದು ನಗುತ್ತಿದ್ದೆವು! ರಸ್ತೆ ಖಾಲಿ ಇದ್ದರೂ ಕೆಟ್ಟದಾಗಿ horn ಮಾಡಿಕೊಂಡು ಹೋಗುತ್ತಿರುತ್ತಾರೆ ಯಾರೂ ಅಡ್ಡ ಬರದೇ ಇರಲಿ ಎಂದು. ಪ್ರಪಂಚ ಹಾಳಾಗಿ ಹೋದರು ನಾನು ಮೊದಲು ನುಗ್ಗಬೇಕು 'me first' ಎನ್ನುವ attitude ಬದಲಾದ ಹೊರತೂ ಯಾವುದೂ ಬದಲಾಗುವುದಿಲ್ಲ.
ಇಲ್ಲಿನ ನನ್ನಂಥ ಪಾದಚಾರಿಗಳಂತೂ ಎಲ್ಲಿಯೂ ಸಲ್ಲದವರು. ನಿಬಿಡ ರಸ್ತೆಗಳಲ್ಲಿ ಪ್ರದೇಶದಲ್ಲಿಪಾದಚಾರಿಗಳು ದಾಟಲಿ ಎಂದು ಯಾವ ವಾಹನದವರೂ ವೇಗ ತಗ್ಗಿಸುವುದಿಲ್ಲ, signal ಇಲ್ಲದ ಹೊರತು ನಿಲ್ಲಿಸುವುದಂತೂ ಇಲ್ಲವೇ ಇಲ್ಲ. ಬೇಕಿದ್ದರೆ ಇನ್ನೂ ಜೋರಾಗಿ horn ಮಾಡುತ್ತಾರೆ; ನನ್ನ ರಸ್ತೆ, ನೀನೇಕೆ ಅಡ್ಡ ಬರುತ್ತೀಯಾ ಎಂಬಂತೆ. ಎಲ್ಲವೂ ಸಂಸ್ಕಾರದಲ್ಲಿಯೇ ಬರಬೇಕು ಅಷ್ಟೇ. ಇತರ ದೇಶಗಳಲ್ಲಿ ಪಾದಚಾರಿಗಳಿಗೆ ಮೊದಲ ಆದ್ಯತೆ, bicycle ನವರಿಗೆ ಎರಡನೇ ಆದ್ಯತೆ, ಸ್ವಂತ ವಾಹನಗಳ ಚಾಲಕರಿಗೆ ಕೊನೆಯ ಆದ್ಯತೆ ಇದೆ ಎಂಬಂತೆ ನಡೆದುಕೊಳ್ಳುತ್ತಾರೆ. ಇದು ಯಾವ ಕಾನೂನಿನ ಮೂಲಕ ಬಂದಿದ್ದಲ್ಲ. ತಮ್ಮಂತೆ ಇತರರೂ ಮನುಷ್ಯರು ಎಂಬ ಭಾವನೆಯಿಂದ ಬಂದಿದ್ದು ಅಷ್ಟೇ. ಟೋಕಿಯೋದಲ್ಲಿ ಪಾದಚಾರಿಗಳು ರಸ್ತೆ ದಾಟುವಾಗ ಇತರ ವಾಹನದವರು ಹೆಚ್ಚು ಕಡಿಮೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವೊಮ್ಮೆ ನಾವು ನಿಂತು ಅವು ಮೊದಲು ಹೊರಡುವಂಥಾದರೆ ನಮ್ಮ ಕಡೆ ನೋಡಿ ಒಮ್ಮೆ ತಲೆ ಬಗ್ಗಿಸಿ ಧನ್ಯವಾದ ಸೂಚಿಸದೇ ಇರುವುದಿಲ್ಲ. ನಾನು ಅಲ್ಲಿಂದ ಹಿಂದಿರುಗಿ ಬಂದ ಒಂದೆರಡು ದಿನಗಳ ಕಾಲ ರಸ್ತೆ ದಾಟಲು ತಡಬಡಾಯಿಸಿದ್ದೆ. ಈಗ ಮತ್ತೆ expert; ಹುಟ್ಟಾ ಕಲಿತದ್ದು ಎಲ್ಲಿ ಹೋಗ ಬೇಕು ಹೇಳಿ! Bus, train ಗಳಲ್ಲಿ ನಿಲ್ಲುವಾಗ, ಕುಳಿತುಕೊಳ್ಳುವಾಗ ಇತರರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸುತ್ತಾರೆ. ಪಕ್ಕ ಕೂತು ನಿದ್ದೆ ಮಾಡುತ್ತಿದ್ದರೂ ಮೈಮೇಲೆ ಬೀಳುವುದಿಲ್ಲ. ಗಂಡಸರ ಮೇಲೆ ನಾವು safety pin ಪ್ರಯೋಗಿಸುವ ಅಗತ್ಯ ಬೀಳುವುದೇ ಇಲ್ಲ.
workplace ಗಳಲ್ಲೂ ಅಷ್ಟೇ, ಬೇರೆಯವರ ಬಗ್ಗೆ gossip ಮಾಡುವಷ್ಟು ಪುರಸೊತ್ತು ಯಾರಿಗೂ ಇಲ್ಲ. ನಮ್ಮಲ್ಲಿಯ ಕಥೆಯೇ ಬೇರೆ, ಎದುರಿಗೆ ಸಿಕ್ಕಾಗ ನಗಲೂ ಕೂಡ ವಿಚಾರ ಮಾಡುವವರು ನಮ್ಮ ಬೆನ್ನ ಹಿಂದೆ ನಮ್ಮ ಬಗ್ಗೆ ಏನೆಲ್ಲಾ ಹೇಳುತ್ತಿರುತ್ತಾರೆ. ನಾನು ನಮ್ಮ ಸಂಸ್ಕೃತಿ, ಪರಂಪರೆಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವುದಷ್ಟೇ ಉಳಿದಿದೆಯೇ ವಿನಃ ಹಿರಿಯರು ಉಳಿಸಿದ್ದ ಸಂಸ್ಕಾರಗಳನ್ನೆಲ್ಲ ಗಾಳಿಗೆ ತೂರಿಕೊಂಡು ಸ್ವಾರ್ಥದ ಬೆನ್ನು ಹತ್ತಿದ್ದೇವೆ, hypocrite ಗಳಾಗಿದ್ದೇವೆ, ಮನುಷ್ಯತ್ವವನ್ನೇ ಮರೆತಿದ್ದೇವೆ.
ಇಷ್ಟೆಲ್ಲಾ ಯಾಕೆ ಮಾತಾಡಿದೆ? ಇಂದು ಬೆಳಿಗ್ಗೆ inbox ನಲ್ಲಿ ಒಂದು email ಬಂದು ಕುಳಿತಿತ್ತು. ನಿಮ್ಮೆಲ್ಲರೊಡನೆ ಹಂಚಿಕೊಳ್ಳುವುದರಲ್ಲಿ ಏನೋ ಒಂಥರಾ ಖುಷಿ. ನಿಮಗೂ ಕೂಡ ಇಂಥದೇ email ಸಿಕ್ಕಿರಬಹುದು. ಈ ಕೆಳಗಿನ link ನೋಡಿ.
ಇದರಲ್ಲಿ ಎಷ್ಟನ್ನು ನಾವು ಪಾಲಿಸುತ್ತೇವೆಯೋ ಗೊತ್ತಿಲ್ಲ. ಪ್ರಯತ್ನ ಪಡುವುದರಲ್ಲಿ ತಪ್ಪೇನಿಲ್ಲ ಅಲ್ಲವೇ? ಅಂದು ಗಾಂಧೀಜಿ ಹೇಳಿದ್ದು, ಇಂದು ಒಬಾಮಾ ಹೇಳುತ್ತಿರುವುದು - "Be the change you want to see."

10 comments:

Shankar Prasad ಶಂಕರ ಪ್ರಸಾದ said...

ಸೀಮಕ್ಕ.. ಬಹಳ ದಿನವಾದ ಮೇಲೆ ನಿಮ್ಮ ಲೇಖನ ಕಣ್ಣಿಗೆ ಬಿದ್ದದ್ದು.
ಜೊತೆಗೆ ಒಳ್ಳೆ ವಿಚಾರದ ಬಗ್ಗೆ ಬರೆದಿದ್ದೀರ. ಇಲ್ಲಿ ಹೀಗೆ ಗಾಡಿ ಓಡಿಸುವ ಜನ, ಬೇರೆ ದೇಶಕ್ಕೆ ಹೋದಾಗ ಅಲ್ಲಿನ ನಿಯಮಾನುಸಾರ ಕರೇಕ್ಟಾಗಿ ಓಡಿಸ್ತಾರೆ. ಇವರ mentality ಹೆಂಗೆ ಅಂದ್ರೆ, ಯಾರದ್ರೂ ದೊಡ್ಡಣ್ಣ ಇರಬೇಕು ಹೇಳೋಕ್ಕೆ.
ಅಲ್ಲಿನ ಹಾಗೆ ಕಡಕ್ ರೂಲ್ಸು ಇರಬೇಕು. ಜಾಸ್ತಿ ಗಾಂಚಲಿ ಮಾಡಿದರೆ ಲೈಸೆನ್ಸು ಕಿತ್ಕೊಂಡು ಜನ್ಮೇಪಿ ಗಾಡಿ ಓಡಿಸದ ಹಾಗೆ ಮಾಡಬೇಕು. ನೀವು ಹೇಳಿದಂತೆ ಇದೆಲ್ಲಾ ಸಂಸ್ಕಾರದಲ್ಲಿ ಬರಬೇಕು. ಜೊತೆಗೆ ಜೀವದ ಮೇಲೆ ಮರ್ಯಾದೆ ಹಾಗು ಗೌರವ ಇರಬೇಕು.
ನಾನು ಕಂಡಂತೆ, ಯೂರೋಪಿನಲ್ಲಿ, ಆಫೀಸಿನ ಪಾರ್ಕಿಂಗ್ ಜಗದಲ್ಲಿ, ಪ್ರವೇಶ ದ್ವಾರದ ಹತ್ತಿರದ ಪಾರ್ಕಿಂಗ್ ಸ್ಥಳವನ್ನು ಖಾಲಿ ಬಿಡ್ತಾರೆ. ಆಫೀಸಿಗೆ ತಡವಾಗಿ ಯಾದಾದರು ಬಂದ ಪಕ್ಷದಲ್ಲಿ, ಅವರು ಬೇಗನೆ ನಿಲ್ಲಿಸಿ, ಒಳಗೆ ಹೋಗಲು ಅನುವು ಮಾಡಿರುತ್ತಾರೆ. ನಮ್ಮಲ್ಲಿ ಈ ರೀತಿಯ ವ್ಯವಷ್ಟೇ ಅನುಷ್ಠಾನಕ್ಕೆ ತರೋದು ಕಷ್ಟ.
ಬೇರೆ ದೇಶಗಳ ಬಗ್ಗೆ ಹೇಳುತ್ತಾ, ನಮ್ಮ ದೇಶದ ಅವ್ಯವಸ್ಥೆಗಳ ಬಗ್ಗೆ ಜರಿಯುವುದು ಸುಲಭ. ಅಲ್ಲಿ ಪ್ರಗತಿ ಬೇಗ ಆಯಿತು. ಏಕೆಂದರೆ, ಚಿಕ್ಕ ದೇಶ, ಆಲ್ಮೋಸ್ಟ್ ಒಂದೇ ಸಂಸ್ಕೃತಿ, ಒಂದೇ ಭಾಷೆ, ಜೊತೆಗೆ ತುಂಬಾ ಮುಖ್ಯಾವಾದುದು, ಒಂದೇ ಗುರಿ - ನಮ್ಮ ದೇಶ ಎನ್ನುವುದು.
ಆದರೂ ನಮ್ಮ ದೇಶ ಗ್ರೇಟ್ ಕಣ್ರೀ.. ಇಷ್ಟೊಂದು ವೈವಿಧ್ಯತೆಗಳು, ಇಷ್ಟೊಂದು ಸಂಸ್ಕೃತಿ, ಇಷ್ಟೊಂದು ಭಾಷೆ, ಇಷ್ಟೊಂದು ಜಾತಿ, ಇದ್ದೂ ಸಹ ಈ ಲೆವೆಲ್ಲಿಗೆ ಪ್ರಗತಿ ಸಾಧಿಸಿದೆ ಅನ್ನೋದು. ಆದರೂ ನಮ್ಮ ಜನಗಳಲ್ಲಿ "ಇದು ನಮ್ಮ ದೇಶ, ಹೀಗೆ ಮಾಡಬೇಕು, ಹೀಗೆ ಇರಬೇಕು" ಅನ್ನೋ ಗುರಿ ಇಲ್ಲ.. ಅದೊಂದೇ ಬೇಜಾರು ಆಷ್ಟೇ.
ಏನಂತೀರಾ ಸೀಮಕ್ಕ ?

ನಿಮ್ಮವನು,
ಕಟ್ಟೆ ಶಂಕ್ರ

shivu.k said...

ಸೀಮಾ ಮೇಡಮ್,

ಬಹಳ ದಿನಗಳ ನಂತರ ಒಂದು ದೀರ್ಘವಾದ ಲೇಖನವ್ಅನ್ನು ಬರೆದಿದ್ದೀರಿ...ಪಾರ್ಕಿಂಗ್ ವಿಚಾರದಲ್ಲಿ ವಿದೇಶಗಳಲ್ಲಿ ನಡೆಯುವ ಸಬ್ಯತೆ ಬಗ್ಗೆ ನೀವು ಸೇರಿದಂತೆ ಬೇರೆ ಗೆಳೆಯರು ಬರೆಯುವುದನ್ನು ಓದಿದ್ದೇನೆ. ಮತ್ತು ನಮ್ಮ ಬೆಂಗಳೂರಿನ ಕತೆಯನ್ನು ಹೋಲಿಸಿಕೊಂಡು ಬೇಸರಪಟ್ಟುಕೊಳ್ಳುತ್ತೇನೆ...ನಮ್ಮ ರಸ್ತೆ, ಪಾರ್ಕಿಂಗ್, ನಿಯಮ ಪಾಲಿಸುವಿಕೆಯಲ್ಲಾ ಯಾವಾಗ ಬದಲಾಗುತ್ತದೋ ..ದೇವರಿಗೆ ಗೊತ್ತು.

ಆದ್ರೆ ನಿಮ್ಮಂಥವರು ವಿದೇಶದಲ್ಲಿ ಇಂಥ ವಿಚಾರಗಳ ಬಗ್ಗೆ ಬರೆದಾಗ ಅಲ್ಲಿನ ಜನರ ಬಗ್ಗೆ ಒಳ್ಳೆ ಭಾವನೆ ಉಂಟಾಗುತ್ತದೆ..

ಧನ್ಯವಾದಗಳು..

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕಾ...
ನಮ್ಮ ದೇಶದಲ್ಲಿ ಹೆಚ್ಚಿನ ಕೆಲಸಗಳು ನಡೆಯುವುದು ರಸ್ತೆ ಬದಿಯಲ್ಲಿ ಮತ್ತು ರಸ್ತೆಯಲ್ಲಿ. ರಸ್ತೆಬದಿಗಳು ಹೆಚ್ಚಿನ ಜನರ ವೃತ್ತಿಕೇಂದ್ರಗಳಾಗಿವೆ. ಉಳಿದ ದೇಶಗಳಲ್ಲಿ ರಸ್ತೆಯನ್ನು ಬಳಸುವುದು ಬರೀ ಸಂಚಾರಕ್ಕಾಗಿ ಮಾತ್ರ.
ನಡೆದು ಸಾಗುವ ಮಾರ್ಗವನ್ನು ಹೆಚ್ಚು ಪ್ರೀತಿಸುವುದನ್ನು ನಾವು ಕಲಿತಿದ್ದು, ನಡೆದು ಸಾಗುವುದನ್ನೇ ಹೆಚ್ಚು ಪ್ರೀತಿಸಿದ್ದು ಎಲ್ಲಿ ಎಂಬುದನ್ನೊಮ್ಮೆ ಯೋಚಿಸಿದರೆ ಮತ್ತೆ ಇಂಥ ಬೇಸರವಾಗುವುದಿಲ್ಲ.
ಚೆಂದದ ಬರಹ ಅನ್ನುವುದನ್ನು ಹೇಳಿ ಕೆಂಗಣ್ಣಿಗೆ ಗುರಿಯಾಗುವ ಮನಸ್ಸಿಲ್ಲ :-)
ನೀನು ಅಲವತ್ತುಕೊಳ್ಳುವುದನ್ನು ಹತ್ತಿರದಿಂದ ಕೇಳಿ ನಿನ್ನ ತಲೆತಿಂದು ಬೈಸಿಕೊಳ್ಳುವುದಕ್ಕೆ ನಾನೂ ಬರುವವಳಿದ್ದೇನೆ, ಯಾವಾಗ ಅಂತ ಗೊತ್ತಿಲ್ಲ.

ನೀ ಕೊಟ್ಟ ಗೂಗಲ್ ಪೇಜ್ ಅಲ್ಲಿ ಎಂತೂ ಬತ್ತಾ ಇಲ್ಯೆ, ಆ ಪೇಜ್ ಖಾಲಿ ಇದ್ದಪ.

Shree said...

ಹೂಂ, ಎಂತೂ ಬತ್ತಾ ಇಲ್ಯೇ, ಪೇಜ್ ಖಾಲಿ ಇದ್ದು! :-)

Hey, Sorry sorry sorry... I hope u understand why :-)

Ravi Hegde said...

ಸೀಮಾ ಹೇಳೋದು ಕರೆಕ್ಟು.

ಬೆಂಗಳೂರಿನ ಶೇ.50ರಷ್ಟು ಟ್ರಾಫಿಕ್ ಪ್ರಾಬ್ಲಮ್ಮಿಗೆ ಈ ಜನಗಳ ಕೆಟ್ಟ "ರಸ್ತೆ ಸಂಪ್ರದಾಯವೇ" ಕಾರಣ. ರೂಲ್ಸ್ ಪಾಲಿಸೋನೇ ದಡ್ಡ ಅನ್ನೋ ಹಾಗಿದೆ ಸ್ಥಿತಿ. ಇದು ದಿನದಿಂದ ದಿನಕ್ಕೆ ಇನ್ನೂ ಬಿಗಡಾಯಿಸುತ್ತಿರೋದನ್ನ ನೋಡಿದ್ರೆ ಬೆಂಗಳೂರು ಬಿಟ್ಟು ಓಡಿ ಹೋಗೋಣ ಅನ್ಸುತ್ತೆ. ಒಂದ್ಸಾರಿ, ಬೆಂಗಳೂರಿನ ಎಂ.ಜಿ. ರೋಡನ್ನ Zero Tolerance Zone ಅಂತ ಘೋಷಣೆ ಮಾಡಿದ್ರು. ಆಗ, ಒಂದು ತಿಂಗಳು ನೋಡ್ಬೇಕಿತ್ತು, ಆ ಪ್ರದೇಶಾನಾ... ಅದೇನು ಇಂಡಿಯಾವೋ, ಫಾರಿನ್ನೋ ಅನ್ನಿಸ್ತಿತ್ತು.

ಆಮೇಲೆ? ದರಿದ್ರದ ನಾಯಿ ಬಾಲ ಡೊಂಕು..

ಮನಸ್ವಿ said...

ತುಂಬಾ ಚನಾಗಿ ಬರದ್ದೆ....
ನಿಜ ಬೆಂಗಳೂರಿನ ಟ್ರಾಫಿಕ್ ಗೋಳು ಯಾರಿಗೂ ಬೇಡ... ಈಗಂತೂ ಎಲ್ಲಿ ನೋಡಿರು ಮೆಟ್ರೋ ರೈಲಿಗಾಗಿ ಮಣ್ಣು ಪರೀಕ್ಷೆ ಮಾಡ್ತ್ಯ ಅಂತ ಇದ್ದ ಬದ್ದ ರಸ್ತೆನ ಅಗದು ಹಾಕಿದ್ದ.. ಅದು ಇನ್ನು ಯಾವಾಗ ಸರಿ ಮಾಡ್ತ್ವೋ ಏನಾ..

Ittigecement said...

ಸೀಮಾ....

ಈ ಟ್ರಾಫಿಕ್ ನಿಂದ ನಮ್ಮ ಎಫಿಶಿಯನ್ಸಿ ಕಡಿಮೆ ಆಗುತ್ತದೆ...

ಸೈಕಲ್ ಬಳಸುವದು ಉತ್ತಮ....

ಆ ವಾತಾವರಣ ನಿರ್ಮಾಣವಾದೀತಾ ನಮ್ಮಲ್ಲಿ...?
ನಾನು ಹೇಳುತ್ತಿರುವದು ಸೈಕಲ್ ಸವಾರರ ಸುರಕ್ಷತೆ ದ್ರಷ್ಟಿಯಿಂದ....

ಸೇಫ್ಟಿ ಇದ್ದಲ್ಲಿ ಇದನ್ನು ಬಳಸುವದು ಒಳ್ಳೆಯದು....

ವಿ.ರಾ.ಹೆ. said...

nija.. adarilli kanoonu muridavanE veera! Be the change you want to see anta nEravada dAriyalli, sariyagi saaguvava tondare anubhavisodE jaasti. Namm samajada mentality sariyagi roopugondE illa, innU eshtu varsha bEkagutto Eno!

Harisha - ಹರೀಶ said...

Sorry, the page (or document) you have requested is not available.

Please check the address and try again.

ಅಂತ ಬರ್ತಾ ಇದ್ದು :-(

ಒಂದು ತಿಂಗಳು ಡೀಸಲ್-ಪೆಟ್ರ‍ೋಲ್ ಸಪ್ಲೈ ಇಲ್ದೇ ಹೋದ್ರೆ ಹ್ಯಾಂಗೆ? (ಬಿ.ಎಂ.ಟಿ.ಸಿ, ಅಂಬ್ಯುಲೆನ್ಸ್ ಇತ್ಯಾದಿಗಳನ್ನು ಬಿಟ್ಟು)

Seema S. Hegde said...

ಶಂಕರ, ಶಿವು, ಶಾಂತಲಾ, ಶ್ರೀ, ರವಿ, ಮನಸ್ವಿ, ಸಿಮೆಂಟು ಮರಳಿನ ಮಧ್ಯೆ, ವಿಕಾಸ ಮತ್ತು ಹರೀಶ
ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಗೆ ನನ್ನಲ್ಲಿ ಮಾತಿಲ್ಲ.
Thanks a lot :-)